
ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಆ ಪ್ರಯುಕ್ತ ಮಕ್ಕಳಿಗೆ ಜನಸಂಖ್ಯೆ ಮತ್ತು ಮಾನವ ಸಂಪನ್ಮೂಲದ ಕುರಿತಾಗಿ ರಸಪ್ರಶ್ನೆ ಕಾರ್ಯಕ್ರಮ ಜರಗಿತು. ಅಧ್ಯಾಪಕರಾದ ಶ್ರೀಮತಿ ಸರಿತ ಕೆ.ವಿ., ಶ್ರೀಮತಿ ಸಿಂಧು ಪಿ.ಸಿ. ಹಾಗೂ ಶ್ರೀಮತಿ ಸಿಜಿ ಥೋಮಸ್ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ ಯುಪಿ ವಿಭಾಗದ ಸಂಪನ್ಮೂಲ ಗುಂಪಿನ ಸಂಚಾಲಕ ಶ್ರೀ ರಾಜೇಶ್ ಪಯ್ಯರಟ್ಟ ಸ್ವಾಗತಿಸಿ ಧನ್ಯವಾದವಿತ್ತರು.
No comments:
Post a Comment